ಶುಕ್ರವಾರ, ಆಗಸ್ಟ್ 14, 2026 | ಬೆಂಗಳೂರು, ಭಾರತ
ಕೆಬಿ ನ್ಯೂಸ್ ಕರ್ನಾಟಕ

ಕೆಬಿ ನ್ಯೂಸ್ ಕರ್ನಾಟಕ

ಜನರಿಂದ,ಜನರಿಗಾಗಿ, ಜನರಿಗೋಸ್ಕರ
ನಿಷ್ಪಕ್ಷಪಾತ, ನಿಖರ ಮತ್ತು ಸಮಯೋಚಿತ ಸುದ್ದಿ ವರದಿಗಾರಿಕೆ: ಸಕ್ರಿಯ
ಬ್ರೇಕಿಂಗ್ ನ್ಯೂಸ್
ಮುಖ್ಯಾಂಶಗಳು: ₹೧೫,೬೧೧ ಕೋಟಿ ವೆಚ್ಚದ ನಮ್ಮ ಮೆಟ್ರೋ ಹಂತ ೩ ರ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಮಂಜೂರಾತಿ.     •     ಹವಾಮಾನ ಮುನ್ಸೂಚನೆ: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ೪೮ ಗಂಟೆಗಳ ಕಾಲ ಭಾರಿ ಮಳೆ ಮುನ್ಸೂಚನೆ.     •     ಕೃಷಿ ಮಾಹಿತಿ: ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಬೆಳೆ ವಿಮೆ ಮತ್ತು ಬಡ್ಡಿರಹಿತ ಸಾಲಕ್ಕೆ ಆನ್‌ಲೈನ್ ನೊಂದಣಿ ಆರಂಭ.
ಭುವನೇಶ್ವರ ಶಿಡ್ಲಾಪುರ ಅವರಿಗೆ ಸರ್ವೋತ್ತಮ ಸೇವಾರತ್ನ ರಾಜ್ಯ ಪ್ರಶಸ್ತಿ .
ಸೋಮವಾರ, ಜುಲೈ 27, 2026 ಮಂಜುನಾಥ್ ಎನ್.ಹೆಚ್ ಬೆಂಗಳೂರು ಪರಿಶೀಲಿಸಿದ ಸುದ್ದಿ

ಭುವನೇಶ್ವರ ಶಿಡ್ಲಾಪುರ ಅವರಿಗೆ ಸರ್ವೋತ್ತಮ ಸೇವಾರತ್ನ ರಾಜ್ಯ ಪ್ರಶಸ್ತಿ .

ಸುದ್ದಿ ಸಾರಾಂಶ: ಹಾವೇರಿ : ಸಮಾಜ ಸೇವೆ, ರೈತರ ಪರ ನಿರಂತರ ಹೋರಾಟ ಹಾಗೂ ನಾಡು-ನುಡಿಯ ಅಭಿವೃದ್ಧಿಗೆ ಸಲ್ಲಿಸಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಪ್ರಗತಿಪರ ರೈತ, ರೈತ ಸಂಘದ ಜಿಲ್ಲಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಹಾಗೂ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಭುವನೇಶ್ವರ ಬಸವಣ್ಣೆಪ್ಪ ಶಿಡ್ಲಾಪುರ ಅವರಿಗೆ "ಸರ್ವೋತ್ತಮ ಸೇವಾರತ್ನ ರಾಜ್ಯ ಪ್ರಶಸ್ತಿ" ಪ್ರದಾನ ಮಾಡಿ ಗೌರವಿಸಲಾಯಿತು.

ಸಮಾಜ ಸೇವೆ, ರೈತರ ಪರ ನಿರಂತರ ಹೋರಾಟ ಹಾಗೂ ನಾಡು-ನುಡಿಯ ಅಭಿವೃದ್ಧಿಗೆ ಸಲ್ಲಿಸಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಪ್ರಗತಿಪರ ರೈತ, ರೈತ ಸಂಘದ ಜಿಲ್ಲಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಹಾಗೂ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಭುವನೇಶ್ವರ ಬಸವಣ್ಣೆಪ್ಪ ಶಿಡ್ಲಾಪುರ ಅವರಿಗೆ "ಸರ್ವೋತ್ತಮ ಸೇವಾರತ್ನ ರಾಜ್ಯ ಪ್ರಶಸ್ತಿ" ಪ್ರದಾನ ಮಾಡಿ ಗೌರವಿಸಲಾಯಿತು.

ಹಾವೇರಿಯಲ್ಲಿ ಕರ್ನಾಟಕ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ರಾಜ್ಯಾಧ್ಯಕ್ಷ ಡಾ. ಜಿ. ಶಿವಣ್ಣ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಸಾಹಿತಿಗಳಾದ ಡಾ. ಸತೀಶ ಕುಲಕರ್ಣಿ, ಡಾ. ರಮೇಶ್ ಮಹಾದೇವಪ್ಪನವರ, ಡಾ. ಎಚ್.ವಿ. ಬೆಳಗಲಿ, ಡಾ. ಶಾಂತಣ್ಣ ವೈ. ಕಡಿವಾಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಭುವನೇಶ್ವರ ಶಿಡ್ಲಾಪುರ ಅವರು ರೈತರ ಹಕ್ಕುಗಳ ರಕ್ಷಣೆಗೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ನೀಡಿರುವ ಸೇವೆ ಶ್ಲಾಘನೀಯವಾಗಿದ್ದು, ಅವರ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದು ಅಭಿನಂದಿಸಿದರು.

ಸಂಬಂಧಿತ ಪ್ರಮುಖ ಸುದ್ದಿಗಳು
ಸುದ್ದಿಯನ್ನು ಹಂಚಿಕೊಳ್ಳಿ
URL: kbnewskarnataka.com/bhuvaneshwar-shidlapur-honoured-with-sarvottama-seva-ratna-state-award-3-1