Wednesday, July 1, 2026 | Bengaluru, India
KB News Karnataka

KB News Karnataka

Of the people, by the people, for the people
Unbiased, Accurate & Timely News Reporting: Active
Breaking News
Breaking News: Central Cabinet clears Bengaluru Metro Phase 3 project costing ₹15,611 crore.     •     Weather Update: Heavy rains predicted in coastal districts of Karnataka for next 48 hours.     •     Agricultural Update: Online registration for zero-interest crop insurance opens today across all districts.
ಸಮಾಜ ಸೇವೆಯಿಂದ ಮಾಧ್ಯಮ ಕ್ಷೇತ್ರಕ್ಕೆ: ಬಸವರಾಜ ಕಟ್ಟಿಮನಿ ಅವರ ಹೊಸ ಹೆಜ್ಜೆ
Wednesday, July 1, 2026 Manjunath N.H Verified News

ಸಮಾಜ ಸೇವೆಯಿಂದ ಮಾಧ್ಯಮ ಕ್ಷೇತ್ರಕ್ಕೆ: ಬಸವರಾಜ ಕಟ್ಟಿಮನಿ ಅವರ ಹೊಸ ಹೆಜ್ಜೆ

Summary Outline: ಸಮಾಜದ ನೊಂದವರ ಪರವಾಗಿ ಧ್ವನಿಯಾಗುವ ಸಂಕಲ್ಪದೊಂದಿಗೆ ಸಾಮಾಜಿಕ ಹೋರಾಟಗಾರ ಬಸವರಾಜ ಕಟ್ಟಿಮನಿ ಅವರು KBNEWS KARNATAKA ಎಂಬ ಡಿಜಿಟಲ್ ಸುದ್ದಿ ವಾಹಿನಿಯನ್ನು ಆರಂಭಿಸಿದ್ದಾರೆ. ನಿಷ್ಪಕ್ಷಪಾತ ಸುದ್ದಿ, ಸಾಮಾಜಿಕ ನ್ಯಾಯ ಹಾಗೂ ಜನರ ಹಕ್ಕುಗಳಿಗಾಗಿ ಈ ಮಾಧ್ಯಮ ಕಾರ್ಯನಿರ್ವಹಿಸಲಿದೆ.
ಸಮಾಜದ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಬಸವರಾಜ ಕಟ್ಟಿಮನಿ ಅವರು ತಮ್ಮ ಜನಪರ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ KBNEWS KARNATAKA DIGITAL ಎಂಬ ಡಿಜಿಟಲ್ ಸುದ್ದಿ ವಾಹಿನಿಯನ್ನು ಆರಂಭಿಸಿದ್ದಾರೆ. ಫೇಸ್‌ಬುಕ್, ಯೂಟ್ಯೂಬ್ ಹಾಗೂ ವೆಬ್‌ಸೈಟ್ ಮೂಲಕ ಜನರಿಗೆ ನಿಖರ, ನಿಷ್ಪಕ್ಷಪಾತ ಹಾಗೂ ಸತ್ಯಾಧಾರಿತ ಸುದ್ದಿಗಳನ್ನು ತಲುಪಿಸುವ ಗುರಿಯನ್ನು ಹೊಂದಿದ್ದಾರೆ. 1986ರ ಜುಲೈ 1ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಗ್ರಾಮದಲ್ಲಿ ಶ್ರೀಮತಿ ನಿಂಗವ್ವ ಹಾಗೂ ಪಕ್ಕೀರಪ್ಪ ದಂಪತಿಯ ಎರಡನೇ ಪುತ್ರರಾಗಿ ಜನಿಸಿದ ಬಸವರಾಜ ಕಟ್ಟಿಮನಿ ಅವರು ಬಡ ಕುಟುಂಬದಲ್ಲಿ ಬೆಳೆದು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ಅವರ ತಂದೆ ಪಕ್ಕೀರಪ್ಪ ಅವರು ಸಮಾಜದ ಅನ್ಯಾಯ ಹಾಗೂ ಅಕ್ರಮಗಳ ವಿರುದ್ಧ ಧೈರ್ಯವಾಗಿ ಹೋರಾಡಿದ ಜನಪರ ವ್ಯಕ್ತಿಯಾಗಿದ್ದು, ಬಂಕಾಪುರ ಪುರಸಭೆಯ ಸದಸ್ಯರಾಗಿ ಜನಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಅವರ ಸಾಮಾಜಿಕ ಸೇವೆಯ ಪ್ರೇರಣೆಯಿಂದ ಬಸವರಾಜ ಕಟ್ಟಿಮನಿ ಅವರು ಬಾಲ್ಯದಿಂದಲೇ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡರು. ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ ಸಮಾಜದಲ್ಲಿನ ಅನ್ಯಾಯ, ಶೋಷಣೆ ಹಾಗೂ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತುತ್ತಾ, ಶೋಷಿತರು ಹಾಗೂ ನೊಂದವರ ಪರವಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಶಿಕ್ಷಣ, ಸರ್ಕಾರಿ ಯೋಜನೆಗಳು ಹಾಗೂ ನಾಗರಿಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರಿಗೂ ನಿಖರ ಮಾಹಿತಿ ತಲುಪಿಸುವ ಉದ್ದೇಶದಿಂದ KBNEWS KARNATAKA ಅನ್ನು ಆರಂಭಿಸಲಾಗಿದ್ದು, ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು, ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಬಯಲಿಗೆಳೆಯುವುದು ಹಾಗೂ ಸತ್ಯಾಧಾರಿತ ಸುದ್ದಿಗಳನ್ನು ಜನರಿಗೆ ತಲುಪಿಸುವುದು ಇದರ ಪ್ರಮುಖ ಗುರಿಯಾಗಿದೆ. ಮಾಧ್ಯಮದ ಪ್ರಮುಖ ಉದ್ದೇಶಗಳು: ನೊಂದವರ ಪರವಾಗಿ ಧ್ವನಿಯಾಗುವುದು. ಶೋಷಿತರ ಹಕ್ಕುಗಳನ್ನು ರಕ್ಷಿಸುವುದು. ನಿಷ್ಪಕ್ಷಪಾತ ಹಾಗೂ ಸತ್ಯಾಧಾರಿತ ಸುದ್ದಿಗಳನ್ನು ಪ್ರಕಟಿಸುವುದು. ಭ್ರಷ್ಟಾಚಾರ, ಅನ್ಯಾಯ ಮತ್ತು ಅಕ್ರಮಗಳ ವಿರುದ್ಧ ಹೋರಾಟ ನಡೆಸುವುದು. ಸಮಾಜದಲ್ಲಿ ಜಾಗೃತಿ ಮೂಡಿಸಿ ಜನರ ಹಕ್ಕುಗಳ ಬಗ್ಗೆ ಅರಿವು ಹೆಚ್ಚಿಸುವುದು. "ಜನರಿಂದ... ಜನರಿಗಾಗಿ... ಜನರಿಗೋಸ್ಕರ..." ಎಂಬ ಧ್ಯೇಯವಾಕ್ಯದೊಂದಿಗೆ KBNEWS KARNATAKA ಜನಸೇವೆಯ ಹೊಸ ಅಧ್ಯಾಯವನ್ನು ಆರಂಭಿಸಿದೆ.
Share this News Bulletin
URL: kbnewskarnataka.com/basavaraj-kattimani